kannadaprabha2F2025 05 102Fnrjq0e8c2Fgwiko8xk.bmp

16 ವರ್ಷಗಳಲ್ಲಿ ಇದೇ ಮೊದಲು; 4 ದಿನ ಮುಂಚಿತವಾಗಿ ಮುಂಗಾರು ಪ್ರವೇಶ; ಹವಾಮಾನ ಇಲಾಖೆ


ನವದೆಹಲಿ: ಕೇಂದ್ರ ಹವಾಮಾನ ಇಲಾಖೆ ರೈತರಿಗೆ ಸಿಹಿಸುದ್ದಿ ನೀಡಿದ್ದು, ಈ ಬಾರಿಯ ನೈಋತ್ಯ ಮುಂಗಾರು ಮಳೆ ಕೊಂಚ ಮುಂಚಿತವಾಗಿಯೇ ಆಗಮಿಸಲಿದೆ ಎಂದು ಮಾಹಿತಿ ನೀಡಿದೆ.

ಹೌದು.. ಈ ಕೇಂದ್ರ ಹವಾಮಾನ ಇಲಾಖೆ ಶನಿವಾರ ಮಾಹಿತಿ ನೀಡಿದ್ದು, ವಾಡಿಕೆಯಂತೆ ಕೇರಳಕ್ಕೆ ಜೂನ್ 1ರಂದು ಮಳೆ ಕಾಲಿಡುತ್ತದೆ. ಆದರೆ ಈ ಬಾರಿ ಮುಂಗಾರು ಮಾರುತಗಳು 4 ದಿನಗಳ ಕಾಲ ಮುಂಚಿತವಾಗಿಯೇ ಕೇರಳಕ್ಕೆ ಪ್ರವೇಶ ಮಾಡಲಿದೆ ಎಂದು ಹೇಳಿದೆ.

ಜೂನ್ 1 ರ ಸಾಮಾನ್ಯ ದಿನಾಂಕಕ್ಕಿಂತ ಮುಂಚಿತವಾಗಿ, ಅಂದರೆ ಮೇ 27 ರಂದು ನೈಋತ್ಯ ಮಾನ್ಸೂನ್ ಕೇರಳವನ್ನು ತಲುಪುವ ಸಾಧ್ಯತೆಯಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ಈ ಹಿಂದೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಏಪ್ರಿಲ್‌ನಲ್ಲಿ 2025 ರ ಮಾನ್ಸೂನ್ ಋತುವಿನಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಸಂಚಿತ ಮಳೆಯನ್ನು ಮುನ್ಸೂಚನೆ ನೀಡಿತ್ತು, ಇದು ಭಾರತೀಯ ಉಪಖಂಡದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯೊಂದಿಗೆ ಸಂಬಂಧಿಸಿದ ಎಲ್ ನಿನೊ ಪರಿಸ್ಥಿತಿಗಳ ಸಾಧ್ಯತೆಯನ್ನು ತಳ್ಳಿಹಾಕಿತು.

Shopping Cart
Scroll to Top